Tuesday, April 29, 2008

ನಾವು ಆಗಬೇಕಾದದ್ದು....

ಪ್ರೀತಿಯ ಪುಟ್ಟು.......


ಪ್ಪಾಅಮ್ಮಂದಿರಿಗೆ ತಮ್ಮ ಮಕ್ಕಳ ಬಗ್ಗೆ ಎಸ್ಟೊಂದು ನೀರಿಕ್ಷೆಗಳಲ್ಲವಾ ?! ತನ್ನ ಮಗ/ಮಗಳು ಅದಾಗಬೇಕು, ಇದಾಗಬೇಕು,ಹಂಗಿರಬೇಕು,ಹಿಂಗಿರಬೇಕು.....ಅಬ್ಬಾ!, ತಮ್ಮ ಕರುಳ ಕುಡಿಗಳ ಬಗ್ಗೆ ಎಸ್ಟೊಂದು ಆಶಾಗೋಪುರ ಕಟ್ಟಿಕೊಂಡಿರ್ತಾರಲ್ವಾ  ?! ಮಕ್ಕಳು ಅದನ್ನು ಜಾವಾಬ್ದಾರಿಯಾಗಿ ಸ್ವೀಕರಿಸಬೇಕು , ಆದರೆ ಒಮ್ಮೆಮ್ಮೆ ಅದೇ ಅವರಿಗೆ bandhana ವಾಗಿ ಬಿಡುತ್ತೆ....ಆದರೆ ಅವರ ಕನಸುಗಳನ್ನ ನನಸಾಗಿಸುವುದು ಮಕ್ಕಳ ಹೊಣೆಗಾರಿಕೆ ಯಾಗಿರ್ಬೇಕು ಅಲ್ವಾ? , " ಮಕ್ಕಳ ಸಣ್ಣ ಪುಟ್ಟ ಕನಸುಗಳಿಗಿಂತ, ಫೋಷಕರಿಗೆ ತಮ್ಮ ಮಕ್ಕಳ ಸುಂದರ ಭವಿಷ್ಯದ ಬಗೆಗೆ ಅಗಾಧ ಕಲ್ಪನೆಗಳಿರ್ತಾವೆ", ಅನ್ನೋದು ನನ್ನ ಭಾವನೆ...ನಿನಗೆ ಏನನ್ನಿಸುತ್ತದೆ  ಪುಟ್ಟು?!

ಪುಟ್ಟು, ನಾವು ಏನಾಗಲು  ಹೊರಟಿದ್ದೇವೆ?! ಸಾಧಿಸ್ತೇವೆ, ದೊಡ್ಡ ಅಂಕಿಯ ಸಂಬಳ ಪಡೀತೀವಿ, ಹೆಸರನ್ನು ಮಾಡ್ತೀವಿ...ಅದ್ರೆ ಎಲ್ಲೋ ಒಂದು ಕಡೆ , ನಮ್ಮ ಸಾಧನೆಗಳ  ನಡುವೆ, ಬದುಕಿನ  ಜಂಜಾಟಗಳ  ನಡುವೆ "ನಮ್ಮತನ" ವನ್ನ ಉಳಿಸಿಕೊಳ್ಳಲು ಹೆಣಗಾಡ್ತೀವಿ , ಸ್ನೇಹಿತರನ್ನ ಮರಿತಿವಿ, ನಗುವುದನ್ನು  ಮರಿತಿವಿ, ಈ ಯಾಂತ್ರಿಕೃತ   ಬದುಕಿನ ಭಾಗ ವಾಗಿ ಹೋಗ್ತಿವಿ. ನಮ್ಮ ಸ್ವಂತಿಕೆ ಯನ್ನೇ ಉಳಿಸಿಕೊಳ್ಳುವುದು ಕಸ್ಟವಾಗುತ್ತೆ. ಇದರ ಎಲ್ಲದರಾಚೆಗೆ ಒಂದು "ಸುಂದರ ಬದುಕು" ಇದೆ , ಎಂಬುದರ ಕಲ್ಪನೆಯ ನಮಗೆ ಇರೋದಿಲ್ಲ.

ದ್ರೆ ಪುಟ್ಟು , ನಾವು ಹಾಗಿರೋದು ಬೇಡ.  ಸ್ವಾರ್ಥಗಳಾಚೆಗಿನ  ,  ಜಂಜಾಟ ಗಳಾಚೆಗಿನ , ಒಂದು "ಸುಂದರ ಬದುಕು"  ಕಟ್ಟಿಕೊಳ್ಳೋಣ........../

ನ್ನ್ನ ಗುರುವರ್ಯ , "ಡಿವಿಜಿ " ಯವರು ,ಹೇಳಿದ್ದು ಇದನ್ನೇ ಅಲ್ಲವೇ.........?!!!!!!!

"ಹುಲ್ಲಾಗು ಬೆಟ್ಟದಡಿ,
ಮನೆಗೆ ಮಲ್ಲಿಗೆಯಾಗು,
ಕಲ್ಲಾಗು ಕಸ್ಟ ಗಳ ಮಳೆಯ ವಿಧಿ ಸುರಿಯೆ,
ಬೆಲ್ಲ ಸಕ್ಕರೆಯಾಗು ,ಧೀನ ದುರ್ಬಲರಿಂಗೆ,
 ಎಲ್ಲರೊಳಗೊಂದಾಗು  ಮಂಕುತಿಮ್ಮ "

ದನ್ನ ನೀ ಮರೆತಿಲ್ಲ ತಾನೆ...?!..........ನಾವು ಆಗಬೇಕಾದದ್ದು ಇದೆ.....ಎಲ್ಲರೋಳಗೊಂದಾಗುವುದು......ನೀ ಜೋತೆಯಲ್ಲಿರು ಅಷ್ಟೆ .......!!!!!!!!!!

ಪ್ರೀತಿಯಿಂದ,
ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ.....
 

2 comments:

ಶರಶ್ಚಂದ್ರ ಕಲ್ಮನೆ said...

ಪ್ರಿಯ ಚುಕ್ಕಿ ಅವರೆ ನಿಮ್ಮ ಬರಹಗಳು ಚೆನ್ನಾಗಿವೆ. ಸಾಧ್ಯವಾದಷ್ಟು ಕಾಗುಣಿತಗಳ ತಪ್ಪನ್ನು ಕಡಿಮೆ ಮಾಡಿ. ಮೊದಮೊದಲು ಕನ್ನಡದಲ್ಲಿ ಟೈಪ್ ಮಾಡುವ ಕಷ್ಟವನ್ನು ಬಲ್ಲೆ. ಆದರೂ ಪ್ರಯತ್ನ ಮಾಡಿ. ನಿಮ್ಮಿಂದ ಇನ್ನೂ ಒಳ್ಳೆಯ ಬರಹಗಳನ್ನು ನಿರೀಕ್ಷಿಸುತ್ತಿದ್ದೇನೆ.

*ಚುಕ್ಕಿ* said...

ಹೊಸದಾಗಿ ಬ್ಲಾಗ್ ಲೋಕಕ್ಕೆ ಕಾಲಿರಿಸಿದಾಗ ನಾನು ತೆವಳುವ ಕೂಸ. ಬಿಡುವಿನ ಸಮಯದಲ್ಲಿ ಹಾಗೆ ಬೆಟ್ಟಿ ಕೊಟ್ಟು ಹೋಗುತ್ತಿದ್ದೆ. ನಿಮ್ಮ ಸಲಹೆ , ನನ್ನ ಜವಾಬ್ದಾರಿ ಕೂಡ. ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇನೆ. ಧನ್ಯವಾದ ತಮ್ಮ ಪ್ರೀತಿಗೆ.