Sunday, October 26, 2008

ವಿವೇಕ ಕಿಡಿ..ಸೇವೆಗೆ ಕರೆ


" ಐಶ್ವರ್ಯ ಹೀನರಾದ,  ನಿರ್ಭಾಗ್ಯರಾದ     , ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪದದಳಿತರಾದ, ಉಪವಾಸದಿಂದ ನರಳುವ,  ಕಾದಾಡಿ  ಅಸೂಯೆ ಪಡುವ ನಮ್ಮ ದೇಶದವರನ್ನು ಪ್ರೀತಿಸಿದರೆ, ಅವರು ಮತ್ತೊಮ್ಮೆ ಮೇಲೆ ಏಳುವರೆಂದು    ನಾನು ನಂಬುತ್ತೇನೆ. ನೂರಾರು ಜನ ಉದಾರ ಹೃದಯರಾದ ಸ್ತ್ರೀ ಪುರುಷರು ಜೀವನದ ಸುಖ ವನ್ನು ಅನುಭವಿಸಬೇಕೆಂಬ ಆಸೆ ಎಲ್ಲವನು  ತೊರೆದು, ಬಡತನ ಅಜ್ಞಾನ ಕೂಪದಲ್ಲಿ ದಿನೇ ದಿನೇ ಆಳ ಆಳಕ್ಕೆ ಮುಳುಗುತ್ತಿರುವ ನಮ್ಮ ನಾಡಿನ ಲಕ್ಷಾಂತರ ಜನರ ಹಿತಕ್ಕೊಸುಗವಾಗಿ ತವಕಿಸಿ ಯಾವಾಗ ಕೈಲಾದ ಮಟ್ಟಿಗೆ ಕಸ್ಟ  ಪಡುವರೋ  , ಆಗ ಮಾತ್ರ ಭರತ  ಖಂಡ  ಮೇಲೆ ಏಳುವುದು" ........ಸ್ವಾಮಿ ವಿವೇಕಾನಂದರು 

ಪ್ರೀತಿಯ ಪುಟ್ಟು , 

ದೊಡ್ಡವರು ಹೇಳಿರೋ ಮಾತ್ ಗಳನ್ನೆಲ್ಲ ಕಾರ್ಯರೂಪಕ್ಕೆ ತಂದರೆ ಈ ಸಮಾಜ, ಪರಿಸರ, ನಮ್ಮ ಮನೆ - ಮನಸ್ಸು ಎಷ್ಟು ಚಂದ ಇರುತ್ತಲ್ವಾ...?! ಅದೇ ಪ್ರಯತ್ನದಲ್ಲಿ  ನಮ್ಮ ಬದುಕಿನ ಗಾಲಿ ಚಲಿಸುತ್ತಿರಬೇಕು. ಏನಂತೀಯ..?!!!!!!!!   

ಇತಿ,
ನಿನ್ನ ಚುಕ್ಕಿ

2 comments:

ಸೀತಾರಾಮ. ಕೆ. / SITARAM.K said...

ವಿವೇಕಾನಂದರ ನುಡಿಮುತ್ತನ್ನು ಚೆನ್ನಾಗಿ ಅನುವಾದಿಸಿದ್ದಿರಾ ಮತ್ತು ಅದು ಪ್ರಸ್ತುತ ಸಹಾ.
ಕನ್ನಡದಲ್ಲಿ ಮೊದಲು ಟೈಪಿಸುವಾಗ ಸ್ವಲ್ಪ ಕಷ್ಟವೇ! ಕಾಗುಣಿತ ತಪ್ಪುಗಳು ಬಹಳ ಇರುವದರಿಂದ ಓದಲು ಸ್ವಲ್ಪ ತೊಂದರೆಯಾಯಿತು. ಒಮ್ಮೆ ಅದನ್ನು ದಯವಿಟ್ಟು ತಿದ್ದಿ.

*ಚುಕ್ಕಿ* said...

ಮನಸ್ಸಿಗೆ ಬಂದ ಆಲೋಚನೆಗಳನ್ನು ಅಕ್ಷರರೂಪಕ್ಕಿಳಿಸಲು , ಅಂತರ್ಜಾಲದಲ್ಲಿ ಅಂಬೆಗಾಲಿಡುವ ದಿನಗಳಲ್ಲಿ ಬ್ಲಾಗ್ ಮಾಡಿದೆ, ಹಾಗಾಗಿ ಕೆಲವು ಕಾಗುಣಿತ ದೋಷಗಳಾಗಿವೆ. ಸರಿಪಡಿಸಿಕೊಳ್ಳುತ್ತೇನೆ. ತಮ್ಮ ಸಲಹೆಗೆ ಧನ್ಯವಾದಗಳು.ಶುಭ ಹಾರೈಕೆಗಳು .