Wednesday, May 25, 2011

"ಸಾವು" ಎಂಬ ಮಾಯದ ಬೆನ್ನೇರಿ...!!!

ಪ್ರತಿಯೊಬ್ಬರ ಬದುಕಿನಲ್ಲಿ ಬಹಳಷ್ಟು ಅವಕಾಶಗಳು, ಆಯ್ಕೆಗಳಿವೆ . ಹಾಗೆ ಬದುಕಲೂ ಕೂಡ. ಆದರೆ ವಿಧಿಯು ಎಲ್ಲ ಆಯ್ಕೆ, ಅವಕಾಶಗಳನ್ನು ಕಸಿದುಕೊಂಡು "ಸಾವು" ಎಂಬ ಎರಡಕ್ಷರದ ನೋವನ್ನು ಬಡವರ ಪಾಲಿಗೆ ಬಳುವಳಿಯಾಗಿ ನೀಡಿದರೆ, ಅದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ.

ನನ್ನ ಪ್ರಕಾರ "ಸಾವು" ಮನುಷ್ಯನನ್ನು ಪರಿಪೂರ್ಣನಾಗಿಸುತ್ತದೆ. ಬದುಕಿನ ಎಲ್ಲಾ ಮಗ್ಗಲುಗಳನ್ನು ಬದಲಿಸಿ ನೆಮ್ಮದಿಯಾಗಿ ಸಾಯುವ ಮನುಷ್ಯ ನಿಜಕ್ಕೂ ಪರಿಪೂರ್ಣ. ಸಾವು ಎಂಬ ಮಾಯೆ ಯ ಹಿಂದೆ ಎಲ್ಲವು ಶೂನ್ಯ.  ಸಾವು ಎಂಬುದರ ಅನುಭವವೇ ಇಲ್ಲದ ಹಾಗೆ ಸತ್ತು ಬಿಡಬೇಕು. ರಾತ್ರಿ ನಿದ್ರೆ ಮಾಡುತ್ತಿರುವಾಗ, ಅಮ್ಮಾಳ ತೊಡೆಯಲ್ಲಿ ತಲೆ ಇತ್ತು ಮಲಗಿರುವಾಗ, ಸಂಗಾತಿಯ ಅಪ್ಪುಗೆಯಲ್ಲಿ, ಮಕ್ಕಳ ಮುದ್ದಾಟದಲ್ಲಿ ,ದೇವರನ್ನು ಪ್ರಾರ್ಥಿಸುವಾಗ , ನಮಗೆ ಗೊತ್ತಾಗದ ಹಾಗೆ ಸಾವು ನಮ್ಮನ್ನ ಆವರಿಸಬೇಕು. ಆದರೆ ಸಾವು ಎಂಬ ರಕ್ಕಸ ದೈತ್ಯ ರೂಪ ತಾಳಿ , ನಮ್ಮನ್ನ ಅಟ್ಟಾಡಿಸಿ, ದೇಹವನ್ನು ಕೃಶವಾಗಿಸಿ, ಮನಸ್ಸನ್ನು ಕುಗ್ಗಿಸಿ, ಭಯ ಹುಟ್ಟಿಸಿ ನಮ್ಮನ್ನ ಆವರಿಸಿದರೆ, ಅಬ್ಬಾ..! ಅದಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ.


ನಮ್ಮ ಮನೆಯ ಹಿರಿಕ , ನನ್ನ ದೊಡ್ಡಪ್ಪ ಸಾವಿನ ದಿನಗಳನ್ನು ಎಣಿಸುತ್ತಾ, ಹಾಸಿಗೆಯಲ್ಲಿ ಕೃಶವಾಗಿ  ಮಲಗಿದ್ದಾನೆ. ಅವರ ದೇಹದ ಎರಡು ಮೂತ್ರ ಜನಕಾಂಗಗಳು (ಕಿಡ್ನಿ)

1 comment:

Gubbachchi Sathish said...

ಸಾರ್, ಇಲ್ಲಿ ಇನ್‍ಕಂಪ್ಲೀಟ್ ಆಗಿದೆ....ಮುಂದುವರೆಸಿ.