Thursday, February 9, 2012

ಭರವಸೆಯಿರಲಿ ಬದುಕಿನಲಿ ,

ಡಿಯರ್ ಪ್ರೆಂಡ್ಸ್, ಜಗತ್ತಿನಲ್ಲಿ ಯಾವುದು ಅಸಾದ್ಯವಲ್ಲ. ಅಸಾದ್ಯಗಳನ್ನೆಲ್ಲ ಸಾಧ್ಯವಾಗಿಸಿದ ಹಲವು ಸಾಮಾನ್ಯರಾದ 
ಅಸಮಾನ್ಯ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ.  ಹನುಮಂತ ಲಂಕೆಗೆ ಹಾರಲು ಮೊದಮೊದಲು ಅಂಜುತ್ತಿದ್ದ, 
ಆ ಸಂದರ್ಬದಲ್ಲಿ ಜಾಂಬವಂತ ಎಂಬ ಕರಡಿ ಅವನ ಶಕ್ತಿ  ಸಾಮರ್ಥ್ಯಗಳನ್ನು ಅವನಿಗೆ ತಿಳಿಸಿ, ಹುರಿದುಂಬಿಸಿದಾಗ ಅವನು 
ಸಮುದ್ರವನ್ನು ಹಾರಿದ.
 

ಭರವಸೆಯಿರಲಿ  ಬದುಕಿನಲಿ ,
ಅದೊಂದಿದ್ದರೆ ಸಾಕು , ಜೊತೆಗೆ ಬರುವುದು  ಎಲ್ಲವು  ,
ಅಮವಾಸೆ ನಂತರ ಹುಣ್ಣಿಮೆ ಬರಲೇಬೇಕು,
ಕತ್ತಲೆಯೇ ಉತ್ತರವಲ್ಲ ನಿಮ್ಮೆಲ್ಲ ಪ್ರಶ್ನೆಗಳಿಗೆ, 
ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ ಈ ಜಗದಲಿ,
ಶ್ರೀ ಕೃಷ್ಣ ಹೇಳಲಿಲ್ಲವೇ  ಆದದ್ದೆಲ್ಲ ಒಳಿತೆ ಆಯಿತೆಂದು ,
ಭರವಸೆಯಿರಲಿ ಬದುಕಿನಲಿ,
ಸೂರ್ಯ ಮುಳುಗಿದ ನಂತರ ಚುಕ್ಕಿಗಳು ,ಬೆಳಗುವುದಿಲ್ಲವೇ ಭುವಿಯ, 
ಎಂತೆನ್ತಹವರು ಇರುವರು  ಜಗದಲಿ,
ಮಾಡಿಹರು ಅಪ್ರತಿಮ ಸಾಧನೆಯ ,ಎಲ್ಲ ವೈರುದ್ಯಗಳ ನಡುವೆ,
ಅಂಜುವೆ ಏಕೆ ಮನವೇ, 
ಇರುವ ಅವಕಾಶಗಳ ಬಳಸಿಕೋ, 
ಎದೆಯನ್ನು ಉಕ್ಕಾಗಿಸಿ ,ಬುದ್ದಿಶಕ್ತಿಯ  ಅಸ್ತ್ರ ಬಳಸಿ ,
ವಿಧಿಗೆ ಸವಾಲೆಸಿ.
ಯಾವುದು ಅಸಾದ್ಯವಲ್ಲ ಈ ಜಗದಲಿ,
ಭರವಸೆಯಿರಲಿ ಈ ಬದುಕಿನಲಿ,
ನಂಬಿಕೆಯಿರಲಿ ನಿನ್ನ ಶಕ್ತಿ ,ಸಾಮರ್ಥ್ಯಗಳಲಿ, 
ಬದುಕಾಗಲಿ ನೀ ಬಯಸಿದಂತೆ,
ಬಾಳು ಬೆಳಕಾಗಲಿ.


No comments: