Wednesday, February 5, 2014
Wednesday, January 1, 2014
ಹೊಸ ದಿನಗಳನ್ನು ಸ್ವಾಗತಿಸೋಣ
ಆತ್ಮೀಯ ಬಂಧುಗಳೇ ಹೊಸ ವರ್ಶದ ಮೊದಲ ದಿನದ ಹಾಯ್,ಹಲೋ,ನಮಸ್ಕಾರ ಅಂಡ್ ಹೊಸ ವರ್ಶಕ್ಕೆ ತಮ್ಮೆಲ್ಲರಿಗು ಸ್ವಾಗತ ,ಶುಭ ಹಾರೈಕೆಗಳು.
ಜನ್ಮದಿನ, ಹಳೆ ವರ್ಷದ ಕೊನೆಯ ದಿನ, ಹೊಸ ವರ್ಶದ ಮೊದಲ ದಿನ, ಪ್ರೀತಿ ಅರಳಿದ ದಿನ,ಪ್ರೇಮದ ಬೀಳ್ಕೋಡಿಗೆಯ ದಿನ, ಬಾಳ ಸಂಗಾತಿಯನ್ನು ನೋಡಿದ ದಿನ, ಮದುವೆಯ ದಿನ, ಮೊದಲ ಮಿಲನದ ದಿನ, ಮಕ್ಕಳು ಹುಟ್ಟಿದ ದಿನ, ಅವರ ಸಾಧಿಸಿದ ಯಾವುದೋ ದಿನ, ಆತ್ಮೀಯರು ಅಗಲಿದ ದಿನ, ಹಬ್ಬದ ದಿನ..................ಅಬ್ಬಾ! ಎಸ್ಟೊಂದು ದಿನಗಳು ನಮ್ಮ ಬದುಕಿನಲ್ಲಿ ನೆನಪಾಗಿ ಉಳಿಯಲಿಕ್ಕೆ ಬರುತ್ತವೆ ಅಲ್ವಾ?!
ಆತ್ಮಿಯರೆ ನಿಮ್ಮ ಬದುಕಿನ ಸುಂದರ ನೆನಪುಗಳಲ್ಲಿ ಈ ಹೊಸ ವರ್ಶದ ಮೊದಲ ದಿನವು ಸೇರಲಿ. ನೀವು ಬಯಸಿದ ಅವಕಾಶಗಳು ನಿಮಗೆ ಒಲಿದು, ನಿಮ್ಮ ಬದುಕಿನಲ್ಲಿ ಸಂಭ್ರಮ, ಸಾಧನೆ,ಸಂತಸ, ಸಂತೃಪ್ತಿ ನೆಲೆಯೂರಲಿ ಎಂದು ಅಪಾರ ಪ್ರೀತಿಯಿಂದ ಹಾರೈಸುತ್ತೇನೆ.
ಈ ಅಂತರ್ಜಾಲ ಯುಗದಲ್ಲಿ ಎಲ್ಲಾ ಶುಭ ಹಾರೈಕೆಗಳು ಮಿಂಚೆ/ವಾಟ್ಸುಪ್/ಸರ್ಕಲ್/ಸಾಮಾಜಿಕ ತಾಣಗಳು ಇತ್ಯಾದಿ ಮಾಧ್ಯಮಗಳಲ್ಲೆ ವಿನಿಮಯವಾಗುತ್ತವೆ. ಹೃದಯಕ್ಕೆ ಹತ್ತಿರವಾದ ಆತ್ಮೀಯರು ಮಾತ್ರ ಕರೆ ಮಾಡಿ ಕಳೆದ ಬದುಕಿನ ನೆನಪುಗಳ ಜೊತೆ ಹೊಸ ದಿನಗಳಿಗಾಗಿ ಅಕ್ಕರೆಯಿಂದ ಶುಭ ಹಾರೈಸುತ್ತಾರೆ. ನನ್ನ ಬದುಕಿನಲ್ಲಿ ಅಂತಹವರ ಪಟ್ಟಿ ದೊಡ್ಡದಿದೆ. ಅವರಿಗೆಲ್ಲರಿಗು ವಂದನೆಗಳು.
ನಮ್ಮ ಜಂಜಾಟದ ಬದುಕಿನಲ್ಲಿ ಕೆಲವು ಕ್ಷಣಗಳನ್ನಾದರು ನಮ್ಮ ಆತ್ಮಿಯರಿಗಾಗಿ ಮೀಸಲಿಡೋಣ ಎಂಬುದು ನನ್ನ ಮನದಾಳದ ಇಂಗಿತ. ಆಫ್ಕೋರ್ಸ್ ನೀವು ಇದನ್ನು ಪಾಲಿಸುತ್ತೀರಿ ಎಂದು ನಂಬುತ್ತೇನೆ ಹಾಗು ಪಾಲಿಸಲು ಮನವಿ ಮಾಡುತ್ತೇನೆ.
ಈ ವರ್ಶದಲ್ಲೂ ನನ್ನ ಬದುಕಿನ ಗೆಳೆತನದ ಅಂಗಳದಲ್ಲಿ ನಿಮ್ಮ ಹೆಜ್ಜೆಯಿರಲಿ. ಸವಿ ನುಡಿಯಿರಲಿ, ಶುಭ ಕಾಮನೆಗಳಿರಲಿ ಎಂದು ಪ್ರಾರ್ಥಿಸುತ್ತೇನೆ.
೨೦೧೩ ಕ್ಕೆ ಶುಭ ವಿದಾಯ ಹೇಳುತ್ತಾ ಹೊಸ ದಿನಗಳನ್ನು ಅಪಾರ ನೀರಿಕ್ಷೆ/ ಅಕ್ಕರೆಯಿಂದ ಸ್ವಾಗತಿಸೋಣ. ಬನ್ನಿ ಜೊತೆಗೂಡಿ.
ಕನಸುಗಳೊಟ್ಟಿಗೆ ಕೈ ಜೋಡಿಸಿ, ತಾರೆಗಳನ್ನು ಎಟುಕಿಸೋಣ..
ನಿಮ್ಮವ,
ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ......
ಜನ್ಮದಿನ, ಹಳೆ ವರ್ಷದ ಕೊನೆಯ ದಿನ, ಹೊಸ ವರ್ಶದ ಮೊದಲ ದಿನ, ಪ್ರೀತಿ ಅರಳಿದ ದಿನ,ಪ್ರೇಮದ ಬೀಳ್ಕೋಡಿಗೆಯ ದಿನ, ಬಾಳ ಸಂಗಾತಿಯನ್ನು ನೋಡಿದ ದಿನ, ಮದುವೆಯ ದಿನ, ಮೊದಲ ಮಿಲನದ ದಿನ, ಮಕ್ಕಳು ಹುಟ್ಟಿದ ದಿನ, ಅವರ ಸಾಧಿಸಿದ ಯಾವುದೋ ದಿನ, ಆತ್ಮೀಯರು ಅಗಲಿದ ದಿನ, ಹಬ್ಬದ ದಿನ..................ಅಬ್ಬಾ! ಎಸ್ಟೊಂದು ದಿನಗಳು ನಮ್ಮ ಬದುಕಿನಲ್ಲಿ ನೆನಪಾಗಿ ಉಳಿಯಲಿಕ್ಕೆ ಬರುತ್ತವೆ ಅಲ್ವಾ?!
ಆತ್ಮಿಯರೆ ನಿಮ್ಮ ಬದುಕಿನ ಸುಂದರ ನೆನಪುಗಳಲ್ಲಿ ಈ ಹೊಸ ವರ್ಶದ ಮೊದಲ ದಿನವು ಸೇರಲಿ. ನೀವು ಬಯಸಿದ ಅವಕಾಶಗಳು ನಿಮಗೆ ಒಲಿದು, ನಿಮ್ಮ ಬದುಕಿನಲ್ಲಿ ಸಂಭ್ರಮ, ಸಾಧನೆ,ಸಂತಸ, ಸಂತೃಪ್ತಿ ನೆಲೆಯೂರಲಿ ಎಂದು ಅಪಾರ ಪ್ರೀತಿಯಿಂದ ಹಾರೈಸುತ್ತೇನೆ.
ಈ ಅಂತರ್ಜಾಲ ಯುಗದಲ್ಲಿ ಎಲ್ಲಾ ಶುಭ ಹಾರೈಕೆಗಳು ಮಿಂಚೆ/ವಾಟ್ಸುಪ್/ಸರ್ಕಲ್/ಸಾಮಾಜಿಕ ತಾಣಗಳು ಇತ್ಯಾದಿ ಮಾಧ್ಯಮಗಳಲ್ಲೆ ವಿನಿಮಯವಾಗುತ್ತವೆ. ಹೃದಯಕ್ಕೆ ಹತ್ತಿರವಾದ ಆತ್ಮೀಯರು ಮಾತ್ರ ಕರೆ ಮಾಡಿ ಕಳೆದ ಬದುಕಿನ ನೆನಪುಗಳ ಜೊತೆ ಹೊಸ ದಿನಗಳಿಗಾಗಿ ಅಕ್ಕರೆಯಿಂದ ಶುಭ ಹಾರೈಸುತ್ತಾರೆ. ನನ್ನ ಬದುಕಿನಲ್ಲಿ ಅಂತಹವರ ಪಟ್ಟಿ ದೊಡ್ಡದಿದೆ. ಅವರಿಗೆಲ್ಲರಿಗು ವಂದನೆಗಳು.
ನಮ್ಮ ಜಂಜಾಟದ ಬದುಕಿನಲ್ಲಿ ಕೆಲವು ಕ್ಷಣಗಳನ್ನಾದರು ನಮ್ಮ ಆತ್ಮಿಯರಿಗಾಗಿ ಮೀಸಲಿಡೋಣ ಎಂಬುದು ನನ್ನ ಮನದಾಳದ ಇಂಗಿತ. ಆಫ್ಕೋರ್ಸ್ ನೀವು ಇದನ್ನು ಪಾಲಿಸುತ್ತೀರಿ ಎಂದು ನಂಬುತ್ತೇನೆ ಹಾಗು ಪಾಲಿಸಲು ಮನವಿ ಮಾಡುತ್ತೇನೆ.
ಈ ವರ್ಶದಲ್ಲೂ ನನ್ನ ಬದುಕಿನ ಗೆಳೆತನದ ಅಂಗಳದಲ್ಲಿ ನಿಮ್ಮ ಹೆಜ್ಜೆಯಿರಲಿ. ಸವಿ ನುಡಿಯಿರಲಿ, ಶುಭ ಕಾಮನೆಗಳಿರಲಿ ಎಂದು ಪ್ರಾರ್ಥಿಸುತ್ತೇನೆ.
೨೦೧೩ ಕ್ಕೆ ಶುಭ ವಿದಾಯ ಹೇಳುತ್ತಾ ಹೊಸ ದಿನಗಳನ್ನು ಅಪಾರ ನೀರಿಕ್ಷೆ/ ಅಕ್ಕರೆಯಿಂದ ಸ್ವಾಗತಿಸೋಣ. ಬನ್ನಿ ಜೊತೆಗೂಡಿ.
ಕನಸುಗಳೊಟ್ಟಿಗೆ ಕೈ ಜೋಡಿಸಿ, ತಾರೆಗಳನ್ನು ಎಟುಕಿಸೋಣ..
ನಿಮ್ಮವ,
ಚುಕ್ಕಿ...
ಬಿಂದುವಿನಿಂದ ಅನಂತದೆಡೆಗೆ......
Thursday, February 9, 2012
ಭರವಸೆಯಿರಲಿ ಬದುಕಿನಲಿ ,
ಡಿಯರ್ ಪ್ರೆಂಡ್ಸ್, ಜಗತ್ತಿನಲ್ಲಿ ಯಾವುದು ಅಸಾದ್ಯವಲ್ಲ. ಅಸಾದ್ಯಗಳನ್ನೆಲ್ಲ ಸಾಧ್ಯವಾಗಿಸಿದ ಹಲವು ಸಾಮಾನ್ಯರಾದ
ಅಸಮಾನ್ಯ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಹನುಮಂತ ಲಂಕೆಗೆ ಹಾರಲು ಮೊದಮೊದಲು ಅಂಜುತ್ತಿದ್ದ,
ಆ ಸಂದರ್ಬದಲ್ಲಿ ಜಾಂಬವಂತ ಎಂಬ ಕರಡಿ ಅವನ ಶಕ್ತಿ ಸಾಮರ್ಥ್ಯಗಳನ್ನು ಅವನಿಗೆ ತಿಳಿಸಿ, ಹುರಿದುಂಬಿಸಿದಾಗ ಅವನು
ಸಮುದ್ರವನ್ನು ಹಾರಿದ.
ಭರವಸೆಯಿರಲಿ ಬದುಕಿನಲಿ ,
ಅದೊಂದಿದ್ದರೆ ಸಾಕು , ಜೊತೆಗೆ ಬರುವುದು ಎಲ್ಲವು ,
ಅಮವಾಸೆ ನಂತರ ಹುಣ್ಣಿಮೆ ಬರಲೇಬೇಕು,
ಕತ್ತಲೆಯೇ ಉತ್ತರವಲ್ಲ ನಿಮ್ಮೆಲ್ಲ ಪ್ರಶ್ನೆಗಳಿಗೆ,
ಪರಿಹಾರವಿಲ್ಲದ ಸಮಸ್ಯೆಗಳೇ ಇಲ್ಲ ಈ ಜಗದಲಿ,
ಶ್ರೀ ಕೃಷ್ಣ ಹೇಳಲಿಲ್ಲವೇ ಆದದ್ದೆಲ್ಲ ಒಳಿತೆ ಆಯಿತೆಂದು ,
ಭರವಸೆಯಿರಲಿ ಬದುಕಿನಲಿ,
ಸೂರ್ಯ ಮುಳುಗಿದ ನಂತರ ಚುಕ್ಕಿಗಳು ,ಬೆಳಗುವುದಿಲ್ಲವೇ ಭುವಿಯ,
ಎಂತೆನ್ತಹವರು ಇರುವರು ಜಗದಲಿ,
ಮಾಡಿಹರು ಅಪ್ರತಿಮ ಸಾಧನೆಯ ,ಎಲ್ಲ ವೈರುದ್ಯಗಳ ನಡುವೆ,
ಅಂಜುವೆ ಏಕೆ ಮನವೇ,
ಇರುವ ಅವಕಾಶಗಳ ಬಳಸಿಕೋ,
ಎದೆಯನ್ನು ಉಕ್ಕಾಗಿಸಿ ,ಬುದ್ದಿಶಕ್ತಿಯ ಅಸ್ತ್ರ ಬಳಸಿ ,
ವಿಧಿಗೆ ಸವಾಲೆಸಿ.
ಯಾವುದು ಅಸಾದ್ಯವಲ್ಲ ಈ ಜಗದಲಿ,
ಭರವಸೆಯಿರಲಿ ಈ ಬದುಕಿನಲಿ,
ನಂಬಿಕೆಯಿರಲಿ ನಿನ್ನ ಶಕ್ತಿ ,ಸಾಮರ್ಥ್ಯಗಳಲಿ,
ಬದುಕಾಗಲಿ ನೀ ಬಯಸಿದಂತೆ,
ಬಾಳು ಬೆಳಕಾಗಲಿ.
Wednesday, May 25, 2011
"ಸಾವು" ಎಂಬ ಮಾಯದ ಬೆನ್ನೇರಿ...!!!
ಪ್ರತಿಯೊಬ್ಬರ ಬದುಕಿನಲ್ಲಿ ಬಹಳಷ್ಟು ಅವಕಾಶಗಳು, ಆಯ್ಕೆಗಳಿವೆ . ಹಾಗೆ ಬದುಕಲೂ ಕೂಡ. ಆದರೆ ವಿಧಿಯು ಎಲ್ಲ ಆಯ್ಕೆ, ಅವಕಾಶಗಳನ್ನು ಕಸಿದುಕೊಂಡು "ಸಾವು" ಎಂಬ ಎರಡಕ್ಷರದ ನೋವನ್ನು ಬಡವರ ಪಾಲಿಗೆ ಬಳುವಳಿಯಾಗಿ ನೀಡಿದರೆ, ಅದಕ್ಕಿಂತ ದೊಡ್ಡ ಶಿಕ್ಷೆ ಮತ್ತೊಂದಿಲ್ಲ.
ನನ್ನ ಪ್ರಕಾರ "ಸಾವು" ಮನುಷ್ಯನನ್ನು ಪರಿಪೂರ್ಣನಾಗಿಸುತ್ತದೆ. ಬದುಕಿನ ಎಲ್ಲಾ ಮಗ್ಗಲುಗಳನ್ನು ಬದಲಿಸಿ ನೆಮ್ಮದಿಯಾಗಿ ಸಾಯುವ ಮನುಷ್ಯ ನಿಜಕ್ಕೂ ಪರಿಪೂರ್ಣ. ಸಾವು ಎಂಬ ಮಾಯೆ ಯ ಹಿಂದೆ ಎಲ್ಲವು ಶೂನ್ಯ. ಸಾವು ಎಂಬುದರ ಅನುಭವವೇ ಇಲ್ಲದ ಹಾಗೆ ಸತ್ತು ಬಿಡಬೇಕು. ರಾತ್ರಿ ನಿದ್ರೆ ಮಾಡುತ್ತಿರುವಾಗ, ಅಮ್ಮಾಳ ತೊಡೆಯಲ್ಲಿ ತಲೆ ಇತ್ತು ಮಲಗಿರುವಾಗ, ಸಂಗಾತಿಯ ಅಪ್ಪುಗೆಯಲ್ಲಿ, ಮಕ್ಕಳ ಮುದ್ದಾಟದಲ್ಲಿ ,ದೇವರನ್ನು ಪ್ರಾರ್ಥಿಸುವಾಗ , ನಮಗೆ ಗೊತ್ತಾಗದ ಹಾಗೆ ಸಾವು ನಮ್ಮನ್ನ ಆವರಿಸಬೇಕು. ಆದರೆ ಸಾವು ಎಂಬ ರಕ್ಕಸ ದೈತ್ಯ ರೂಪ ತಾಳಿ , ನಮ್ಮನ್ನ ಅಟ್ಟಾಡಿಸಿ, ದೇಹವನ್ನು ಕೃಶವಾಗಿಸಿ, ಮನಸ್ಸನ್ನು ಕುಗ್ಗಿಸಿ, ಭಯ ಹುಟ್ಟಿಸಿ ನಮ್ಮನ್ನ ಆವರಿಸಿದರೆ, ಅಬ್ಬಾ..! ಅದಕ್ಕಿಂತ ದೊಡ್ಡ ನರಕ ಮತ್ತೊಂದಿಲ್ಲ.
ನಮ್ಮ ಮನೆಯ ಹಿರಿಕ , ನನ್ನ ದೊಡ್ಡಪ್ಪ ಸಾವಿನ ದಿನಗಳನ್ನು ಎಣಿಸುತ್ತಾ, ಹಾಸಿಗೆಯಲ್ಲಿ ಕೃಶವಾಗಿ ಮಲಗಿದ್ದಾನೆ. ಅವರ ದೇಹದ ಎರಡು ಮೂತ್ರ ಜನಕಾಂಗಗಳು (ಕಿಡ್ನಿ)
Thursday, September 30, 2010
"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ".
"ಹಸಿವು ಬದುಕಿನ ಪಾಟ ಕಲಿಸುತ್ತವೆ, ಕಷ್ಟಗಳು ಸಾಧನೆಗೆ ಮುನ್ನುಡಿ ಹಾಡುತ್ತವೆ". ಈ ಸಾಲನ್ನು ನಾನು ಬರೆಯಲಿಕ್ಕೆ ಸಾಧ್ಯವಾದುದು , ಒಬ್ಬ ಬಿಹಾರಿ ಮಿತ್ರನ ಅನುಭವದಿಂದ.
ಚರಿತ್ರೆ (ಇತಿಹಾಸ ) ವುಳ್ಳ , ಚಾರಿತ್ರ್ಯ ವಿಲ್ಲದ ರಾಜ್ಯ ಬಿಹಾರ .ಬಿಹಾರ ಭಾರತೀಯ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಹಾಗೆಯೇ ಕ್ರೌರ್ಯ ಮತ್ತು ತನ್ನ ಅಸಂಸ್ಕೃತಿ ಯಿಂದ ಮನೆಮಾತಾಗಿದೆ . ಆದರೂ ಅಲ್ಲಿನ ಜನ ದೇಶದ ಅತ್ಯುನ್ನತ ಹುದ್ದೆಗಳಾದ ನಾಗರಿಕ ಸೇವೆಗಳನ್ನು ಅಲಂಕರಿಸುತ್ತಿದ್ದಾರೆ. ರೈಲ್ವೆ ಇಲಾಖೆಯಲ್ಲಿ ತುಂಬಿ ತುಳುಕುತ್ತಿದ್ದಾರೆ. ಬಿಹಾರ ರಾಜ್ಯದಲ್ಲಿ ಯಾವ ಹೊತ್ತು ಯಾವ ಅನಾಹುತ ಘಟಿಸುತ್ತದೋ ಹೇಳಲಿಕ್ಕಾಗದು. ಶೇ 85 ರಷ್ಟು ಹಳ್ಳಿಗಳು ಬಿಹಾರವನ್ನು ಆವರಿಸಿವೆ. ಹಿಂದುಳಿದ ರಾಜ್ಯ . ಇಸ್ಟೆಲ್ಲಾ ಇದ್ದು ಇದೆಲ್ಲ ಬಿಹಾರಿಗಳಿಗೆ ಸಾದ್ಯವಾದುದಾದರೂ ಹೇಗೆ ?!
ನನ್ನ ಬಿಹಾರಿ ಗೆಳೆಯ ಕೊಟ್ಟ ಉತ್ತರ ಇಸ್ಟೇ ," ಡಿಯರ್ ಪ್ರೆಂಡ್ ಬಿಹಾರದಲ್ಲಿ ವಿದ್ಯುತ್ ಪೂರೈಕೆ ಸರಿ ಇಲ್ಲ ಅಂಡ್ ಇಟ್ ಇಸ್ ನಾಟ್ ಎ ಕಲ್ಚರಡ್ ಸ್ಟೇಟ್ . ಜನಗಳ ಬಳಿ ದುಡ್ಡಿಲ್ಲ. ಮೂರು ನಾಲ್ಕು ಜನ ಯೂಥ್ಸ್ ಒಂದು ಕಡೆ ಸೇರಿ ಓದಿಕೊಳ್ತೇವೆ. ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸ್ತೇವೆ. ಎಲ್ಲಾ ತರದ ಪರೀಕ್ಷೆ ತಕ್ಕೊಲ್ತೆವೆ. ಮೊದಲನೇ ಸಲ ಆಗದೆ ಇದ್ದರೆ , ಎರಡು ಅಥವಾ ಮೂರನೇ ಪ್ರಯತ್ನದಲ್ಲಿ ವಿಜಯ ನಮಗೊಲಿಯುತ್ತದೆ. ಹೊಟ್ಟೆ ತುಂಬಿದರೆ ಯಾವ ಯೋಚನೆ ಕೂಡ ತಲೆಗೆ ಹತ್ತದು. ಮನರಂಜನೆ ಇದ್ದರೆ ಯಾವ ಚಿಂತೆ ಕೂಡ ಸುಳಿಯದು. ಇದು ಯಾವುದು ಬಿಹಾರದಲ್ಲಿಲ್ಲ. ಅಸ್ಟೊಂದು ಸಮಯ ಏನ್ ಮಾಡೋದು.... ಪ್ರಿಪೇರ್ , ಪ್ರಿಪೇರ್ ,ಪ್ರಿಪೇರ್ ಅಂಡ್ ವೀ ಗಾಟ್ ಸಕ್ಸೆಸ್ ."
ನಿಜಕ್ಕೂ ಆತನ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿತು. ಎಲ್ಲಾ ಸರಿಯಿದ್ದೂ ಸಾಧಿಸುವವರೇ ವಿರಳ . ಅಂತದ್ದರಲ್ಲಿ ತಮ್ಮ ರಾಜ್ಯದ ದೌರ್ಭಾಗ್ಯವನ್ನು ,ದುರ್ಬಲತೆಯನ್ನು ಹಳಿಯದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧಿಸಿದ್ದಾರೆ . ನಾವು ಕೂಡ ಅದೆ ಹಾದಿಯಲ್ಲಿ ಸಾಗೋಣ. ಸಾಧನೆಯ ಹಾದಿಗೆ ನಮ್ಮ ಕರ್ನಾಟಕ ಪೂರಕವಾಗಿದೆ. ಆದರೆ ನಮ್ಮ ಮನಸ್ಸುಗಳು ಬದಲಾಗಬೇಕಿದೆ. ಕನ್ನಡ ಭಾಷೆಯ ಪ್ರೇಮದೊಟ್ಟಿಗೆ ಇತರ ಭಾಷೆಯ ಜ್ಞಾನ ವನ್ನು ಮೈ ಗೂಡಿಸಿಕೊಳ್ಳೋಣ. ಬೆಳೆಯೋಣ. ಈ ಜಗಕೆ ಬೆಳಕಾಗೋಣ.
ನಿಜಕ್ಕೂ ಆತನ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿತು. ಎಲ್ಲಾ ಸರಿಯಿದ್ದೂ ಸಾಧಿಸುವವರೇ ವಿರಳ . ಅಂತದ್ದರಲ್ಲಿ ತಮ್ಮ ರಾಜ್ಯದ ದೌರ್ಭಾಗ್ಯವನ್ನು ,ದುರ್ಬಲತೆಯನ್ನು ಹಳಿಯದೆ ಅದನ್ನೇ ಸಕಾರಾತ್ಮಕವಾಗಿ ತೆಗೆದುಕೊಂಡು ಸಾಧಿಸಿದ್ದಾರೆ . ನಾವು ಕೂಡ ಅದೆ ಹಾದಿಯಲ್ಲಿ ಸಾಗೋಣ. ಸಾಧನೆಯ ಹಾದಿಗೆ ನಮ್ಮ ಕರ್ನಾಟಕ ಪೂರಕವಾಗಿದೆ. ಆದರೆ ನಮ್ಮ ಮನಸ್ಸುಗಳು ಬದಲಾಗಬೇಕಿದೆ. ಕನ್ನಡ ಭಾಷೆಯ ಪ್ರೇಮದೊಟ್ಟಿಗೆ ಇತರ ಭಾಷೆಯ ಜ್ಞಾನ ವನ್ನು ಮೈ ಗೂಡಿಸಿಕೊಳ್ಳೋಣ. ಬೆಳೆಯೋಣ. ಈ ಜಗಕೆ ಬೆಳಕಾಗೋಣ.
Friday, August 20, 2010
*....ಅಂದು ನಾನು ಮಗುವಾಗಿದ್ದೆ..ಈಗ ಮಗುವಿನ ತಂದೆ ...*
![]() |
ಇವಿಸ್ಟೇ ಅಲ್ಲ ನನ್ನ ಬಾಲ ಲೀಲೆಗಳು ಅಪಾರ. ಅವೆಲ್ಲವನ್ನು ಈಗ ನೆನಪಿಸಿಕೊಂಡಾಗ ಅವೆಲ್ಲ ಬದುಕಿನ ಮೇಸ್ಟ್ರು ಗಳಾಗಿವೆ, ಅವುಗಳಿಂದ ಕಲಿಯುವುದು ಬಹಳಸ್ಟಿದೆ. ಆದರೆ ನಾವು ದೊಡ್ಡವರಾಗುತ್ತಾ ಹೋದ ಹಾಗೆ ನಮ್ಮೊಳಗಿನ " ಮಗು" ವನ್ನು ಕೊಂದುಬಿಡುತ್ತೇವೆ ಏನೋ ಅನ್ನಿಸುತ್ತದೆ.
ಇಸ್ಟೆಲ್ಲಾ ನೆನಪಾಗಿದ್ದು, ನನ್ನ ಮುದ್ದು ಕಂದಮ್ಮ " ಹಿಮಘ ತೇಜಸ್ " ನ ತುಂಟಾಟಗಳನ್ನು ನೋಡಿ. 8 ತಿಂಗಳ ಮನುಷ್ಯ......! , ಹಾಸಿಗೆಯಲ್ಲಿಯೇ ಈಜುತ್ತಾನೆ,ಪಟ ಪಟ ಕೈ ಕಾಲು ಬಡಿದು ಡ್ಯಾನ್ಸ್ ಮಾಡುತ್ತಾನೆ, ಮುಖಕ್ಕೆ ಹತ್ತಿರ ಇಟ್ಟು ಕೊಂಡರೆ ಕೆನ್ನೆಗೆ ರಪ ರಪ, ಹಲ್ಲೆ ಹುಟ್ಟಿಲ್ಲದ ಬಾಯಿಯಲ್ಲಿ, ತಾ ತಾ, ಆ...ಮ... ,ಆಮ್...,ಕೀ..........ಮತ್ತು ಅವನದೇ ಸಂಗೀತ ಹೇಳುತ್ತಾನೆ, ರಾಮ ರಾಮ ಎಂದು ನಾವು ಹೇಳಿದರೆ ಅವನು ಪುಟ್ಟ ಎರಡು ಕೈಗಳನ್ನು ಒಂದಕ್ಕೊಂದು ಬಡಿಯುತ್ತಾ ಭಜನೆ ಮಾಡುತ್ತಾನೆ....8 ತಿಂಗಳ ಮನುಷ್ಯ ....!
ಅಬ್ಬಾ.. ಎಂತಹ ಮುಗ್ದ ನಗು, ತುಂಟಾಟ...! ಇಂದು ನಾನು ಅಪ್ಪನಾಗಿದ್ದೇನೆ, ಅಪ್ಪನಾದ ಮೇಲೆ ನಾನೇ ಮಗುವಾಗಿದ್ದೇನೆ, ನನ್ನ ಮಗ ತುಂಟ ನಗೆ ಬೀರುತ್ತಿದ್ದಾನೆ, ಯಾವುದರ ಮುನ್ಸೂಚನೆಯೋ, ನನ್ನಪ್ಪ ನೆನಪಾಗುತ್ತಿದ್ದಾರೆ......!!!!!
Friday, August 13, 2010
ಒಂದು ಲೇಖನಿ,ಹಲವು ಕಾಲಿ ಕಾಗದಗಳು, ಮತ್ತು ನಾನು...!!!
ಡಿಯರ್ ಪ್ರೆಂಡ್ಸ್ ನಮಸ್ತೆ,
ಪ್ರತಿ ಕ್ಷಣ ಬದುಕನ್ನ, ಈ ಪ್ರಪಂಚವನ್ನ ಮತ್ತು ನನ್ನನ್ನ ಪ್ರೀತಿಸುವ ಮನುಷ್ಯ ನಾನು. "ನನ್ನನ್ನ ನಾನು ಪ್ರೀತಿಸುವುದಕ್ಕೆ ಸಾಧ್ಯ ಆದರೆ ಇಡೀ ಜಗತ್ತನ್ನು ಮತ್ತು ಮಿಕ್ಕೆಲ್ಲವನ್ನೂ ಪ್ರೀತಿಸಬಹುದು" ಎಂಬುದು ನನ್ನ ನಂಬಿಕೆ. ಈ ಪ್ರೀತಿಯ ಯಾನದಲ್ಲಿ ನೂರಾರು ಭಾವಗಳು ನನ್ನನ್ನ ಪುಳಕಿತವನ್ನಗಿ ಮಾಡಿವೆ. ಆತ್ಮ ಶಕ್ತಿ ಮತ್ತು ಆತ್ಮ ಗೌರವಗಳೇ ನನ್ನ ಶಕ್ತಿ. ಇವು ಕೆಲವರಿಗೆ ಸಾಧನೆಯಾಗಿ, ಮತ್ತೆ ಕೆಲವರಿಗೆ ಸ್ಪೂರ್ತಿಯಾಗಿ , ಕೆಲವರಿಗೆ ಅಹಂಕಾರವಾಗಿ ಕಂಡಿವೆ. ಅವರವರ ಭಾವಕ್ಕೆ ಅವರವರ ಪ್ರೀತಿಗೆ " ನನ್ನ ಕನ್ನಡಿಯ ಬಿಂಬ " ಕಂಡಿದೆ. ಆದರೆ ನನಗನಿಸುವುದಿಸ್ಟೇ . ನನ್ನ ಬಳಿ ಹಲವು ಕಾಲಿ ಕಾಗದಗಳಿವೆ , ಒಂದು ಲೇಖನಿ ಇದೆ ಮತ್ತು ನಾನಿದ್ದೇನೆ.
ಹಾಗಾಗಿಯೇ ನನಗನಿಸಿದ ಭಾವನೆಗಳು, ನಾನು ಕಂಡು ಕೊಂಡ ಸತ್ಯಗಳು, ನನ್ನ ಅನುಭವಕ್ಕೆ ನಿಲುಕಿದ ಸಂಗತಿಗಳನ್ನು " ವಿಶ್ವಮುಖಿ " ಯಾಗಿ ಇಲ್ಲಿ ದಾಖಲಿಸುತ್ತಿದ್ದೇನೆ. ನಿಮಗನಿಸಿದ್ದನ್ನು ಖಂಡಿತ ತಿಳಿಸಿ. ತಿಳಿಯುವುದು , ಬೆಳೆಯುವುದು, ಗೊತ್ತಿರುವುದ ಹಂಚಿಕೊಳ್ಳುವುದು, ಜೊತೆಗೂಡಿ ನಡೆಯುವುದು ವಿಶ್ವಮುಖಿಯ ಯಾನದ ಅವಿಬಾಜ್ಯ ಅಂಗಗಳು.
೦೧. ನಾನು ಸಮಾಧಾನಿಸುವವರೆಗಿನ ಕಣ್ಣೀರನ ಹೊಣೆ ನನ್ನದು. ನಂತರ ನೀ ಸುರಿಸುವ ಕಣ್ಣೀರಿಗೂ, ನನಗೂ ಸಂಬಂಧವಿಲ್ಲ. ನಮ್ಮ ಸಂಬಂಧದ ಅನೂನ್ಯತೆ ಇಸ್ಟೇ ಎಂದು ತಿಳಿಯುವೇನು.
೦೨. ಕೆಲವು ಸಂಕಟಗಳು/ನೋವುಗಳು ನಮ್ಮ ಗುರುಗಳು. ಅವು ನಮ್ಮನ್ನ ಅರ್ಥೈಸಿಕೊಳ್ಳಲು , ತಿದ್ದಿಕೊಳ್ಳಲು, ಮುನ್ನಡೆಯಲು ಅನುಕೂಲಕರ.
೦೩. ಪ್ರೀತಿ ಒಂದು ಕ್ರಿಯೆ ಅಲ್ಲ. ಅದು ನನಗೆ ಉಸಿರಾಟದಸ್ಟೇ ಸಹಜ .
೦೪. ಭಗ್ನ ಪ್ರೀತಿಯು ಕೂಡ ಸಾಧನೆಗೆ ಸ್ಪೂರ್ಥಿಯಾಗಬಲ್ಲದು.
Subscribe to:
Posts (Atom)











